Visitors have accessed this post 279 times.
ಮಂಗಳೂರು: ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪಾಲ್ಗೊಂಡರು.
ಮಾಜಿ ಸಚಿವ ಅಭಯ್ ಚಂದ್ರ ಜೈನ್, ಗೇರು ಬೀಜ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದೇವಳದ ಆಡಳಿತ ಮೊಕ್ತೇಸರ ಲಕ್ಷ್ಮಣ್ ಅಮೀನ್ ಕೋಡಿಕಲ್, ಬ್ರಹ್ಮಕಲತ್ಸೋವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಉರ್ವ ವಾಡ್೯ ಅಧ್ಯಕ್ಷ ಟಿ.ಸಿ ಗಣೇಶ್, ಪದ್ಮನಾಭ ಅಮೀನ್, ಮಹಿಳಾ ಜಿಲ್ಲಾಧ್ಯಕ್ಷರ ಶಾಲೆಟ್ ಪಿಂಟೋ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೂಪಾಚೇತನ್, ಮಾಜಿ ಅಧ್ಯಕ್ಷರಾದ ಶಾಂತಲಾ ಗಟ್ಟಿ, ಮನಪಾ ಸದಸ್ಯರಾದ ಚೇತನ್ ಕುಮಾರ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಬಿ.ಸಾಲಿಯಾನ್ , ಸತೀಶ್ ಪೂಜಾರಿ ಅಶೋಕ ನಗರ, ಜಯರಾಂ ಕಾರಂದೂರು, ಉರ್ವ ಹಾಗೂ ಅಶೋಕ ನಗರ ವಾಡ್೯ ಸದಸ್ಯರು ಉಪಸ್ಥಿತರಿದ್ದರು.