Visitors have accessed this post 213 times.
ಕಾಸರಗೋಡು: ಲೋಕಸಭೆ ಚುನಾವಣೆಯ ಕಾಸರಗೋಡು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಬೆಳಿಗ್ಗೆ 8 ಗಂಟೆಗೆ ಪೆರಿಯ ಕೇಂದ್ರ ವಿದ್ಯಾಲಯದ ಮೂರು ಬ್ಲಾಕ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಅಂಚೆ ಮತಗಳ ಎಣಿಕೆಯಲ್ಲಿ ಸಿಪಿಐಎಂ ನ ಎಂ.ವಿ ಬಾಲಕೃಷ್ಣನ್ 516 ಮತಗಳ ಮುನ್ನಡೆ ದೊರಕಿದೆ. ಇವರ ವಿರುದ್ದ ಎನ್ ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಸ್ಪರ್ಧಿಸಿದ್ದಾರೆ.
ಅಂಚೆ ಮತದಾನದ ಎಣಿಕೆಯ ಬಳಿಕ ಪ್ರಥಮ ಬ್ಲಾಕ್ ನಲ್ಲಿ ಮಂಜೇಶ್ವರ, ಕಾಸರಗೋಡು ಮತ್ತು ಉದುಮ ವಿಧಾನಸಭಾ ಕ್ಷೇತ್ರ, ಎರಡನೇ ಬ್ಲಾಕ್ ನಲ್ಲಿ ಕಾಞಂಗಾಡ್, ತ್ರಿಕ್ಕರಿಪುರ,ಪಯ್ಯನ್ನೂರು ಹಾಗೂ ಕಲ್ಯಾಶ್ಯೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.